Tuesday, July 21, 2015

ಮಹಿಳಾ ಭಾರತ - ನಿ- ಡಾ / ಶ್ರೀಪಾದ ಭಟ್

. 8 ಜನ ಮಹಿಳೆಯರು ಒಬ್ಬ ಪುರುಷ ಪಾತ್ರಧಾರಿ ಇರುವ ಈ ನಾಟಕ ಎತ್ತಿಕೊಳ್ಳುವ ಸಂದರ್ಭವೇ ಒದಗಿ ಬಂದಿರಲಿಲ್ಲ. ಈಗ ರಂಗಕ್ಕೆ ಬರುತ್ತಿದೆ. ಈ ಮೊದಲು ನನ್ನ ನಿರ್ದೇಶನದ ಕೆಲ ಮಕ್ಕಳ ನಾಟಕದಲ್ಲಿ ಅಭಿನಯಿಸಿದ ಹುಡುಗಿಯರು ಕಾಲೇಜು ಓದುತ್ತಿದ್ದಾರೆ, ಅವರಿಗಾಗಿ ರಂಗ ತರಬೇತಿ ಆಯೋಜಿಸುವ ಸಂದರ್ಭ ಒದಗಿಬಂತು. ಹೀಗಾಗಿ ಈ ನಾಟಕ ರಂಗಕ್ಕೆ ಬರುತ್ತಿದೆ. ತುಂಬ ಸವಾಲಿನ, ನಾನು ಇದುವರೆಗೂ ನಿರ್ದೇಶಿಸಿದ ನಾಟಕಗಳಲ್ಲಿಯೇ ವಸ್ತುವಿನ ಕಾರಣಕ್ಕಾಗಿ ತಲೆಕೆಡಿಸಿದ ನಾಟಕವಿದು. ಮೊದಲ ಭಾರಿ ದೊಡ್ಡವರ ನಾಟಕಕ್ಕೆಂದು ರಂಗಕ್ಕೇರುತ್ತಿರುವ ಹುಡುಗಿಯರಿಗೆ, ಇದನ್ನು ಸಂಘಟಿಸುತ್ತಿರುವ ರಥಬೀದಿ ಗೆಳೆಯರಿಗೆ, ನನ್ನೊಡನಿರುವ ಪ್ರಸಾದ ರಾವ್, ಸಂತೋಷ ಪಟ್ಲಾ, ಗಣೇಶ ಉಡುಪಿ, ಪ್ರಥ್ವಿನ್, ರಾಜು ಮಣಿಪಾಲ, ನಾಗೇಂದ್ರ ಪೈ ಅವರಿಗೆ, ರಂಗ ಸಜ್ಜಿಕೆ ವಿನ್ಯಾಸ ಗೊಳಿಸಿದ ಕಿರಣ ಭಟ್, ನಿರ್ಮಾಣಗೊಳಿಸಿದ ದಾಮು ಹೊನ್ನಾವರ, ಪ್ರಶಾಂತ ಉದ್ಯಾವರ, ನೃತ್ಯ ಸಂಯೋಜಿಸಿದ ಮಂಜುಳಾ ಸುಬ್ರಹ್ಮಣ್ಯ, ತಾಲೀಮಿಗೆ ಸ್ಥಳ ನೀಡಿದ ಎಂ.ಜೆ.ಸಿ.ಮಣಿಪಾಲ , ಚೆಂದದ ಚಿತ್ರ ನೀಡಿದ ಚೇತನಾ ಅರ್ಥಾತ್ ಅಲವಿಕಾ ಲ಻ ಅವರಿಗೆ ಧನ್ಯವಾದಗಳು. 26 ಜುಲೈ ಉಡುಪಿಯಲ್ಲಿ ನಾಟಕ ಪ್ರದರ್ಶನ. ನನ್ನ ನೆಚ್ಚಿನ ಸಾಹಿತಿ ವೈದೇಹಿ ಉದ್ಘಾಟಿಸಲಿದ್ದಾರೆ. ನೀವೂ ಬನ್ನಿ
 ಮಹಿಳಾ ಭಾರತ -
 ಮೂಲ- ಮಾಧವನ್ ಪಾಂಡಿಚೇರಿ
  ಕನ್ನಡ ರೂಪಾಂತರ - ಅಭಿಲಾಷಾ . ಎಸ್.
 ನಿ- ಶ್ರೀಪಾದ ಭಟ್

No comments:

Post a Comment