Saturday, March 31, 2018

ಗೀತಾ ಸುರತ್ಕಲ್ -ಉಡುಪಿಯ ರಥಬೀದಿ ಗೆಳೆಯರು

Ganesh. M - ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ

ರಥಬೀದಿ ಗೆಳೆಯರು , ರಂಗೋತ್ಸವದಲ್ಲಿ " ಮದರ್ ಕರೇಜ್ "

ಮುರಾರಿ-ಕೆದ್ಲಾಯ ರಂಗೋತ್ಸವ
ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ
ಸಂಜೆ ಗಂಟೆ 7.00
31. 03.2018 ಶನಿವಾರ ಪ್ರದರ್ಶನಗೊಳ್ಳುವ ನಾಟಕ
ಪಾದುವ ರಂಗ ಅಧ್ಯಯನ ಕೇಂದ್ರ, ಮಂಗಳೂರು ಕಲಾವಿದರಿಂದ
"ಮದರ್ ಕರೇಜ್"
ರಚನೆ: ಬ್ರಟೋಲ್ಟ್ ಬ್ರೆಕ್ಟ್, ಕನ್ನಡಕ್ಕೆ : ಲಿಂಗದೇವರು ಹಳೆಮನೆ
ನಿರ್ದೇಶನ: ಪಿ.ಬಿ.ಸತೀಶ್ ನೀನಾಸಂ
.*"ಮದರ್ ಕರೇಜ್"* ಜಗತ್ತಿನ ಪ್ರಮುಖ ನಾಟಕಗಳಲ್ಲಿ ಒಂದು. ಇದು ಯುದ್ಧ ವಿರೋಧಿ ನಾಟಕ. ಯುದ್ದವನ್ನು ವಸ್ತುವಾಗಿಟ್ಟುಕೊಂಡು ಬ್ರೆಕ್ಟ್ ಬರೆದ ಪ್ರಥಮ ನಾಟಕವೂ ಹೌದು.
ಬ್ರೆಕ್ಟ್ *'ಮದರ್ ಕರೇಜ್*' ನಾಟಕವನ್ನು ಬರೆದದ್ದು 1930ರಲ್ಲಿ. ಈ ನಾಟಕದಲ್ಲಿ ಆತ ಏನನ್ನು ಹೇಳಲು ಉದ್ದೇಶಿಸಿದ್ದಾನೆ ಎಂಬುದು ಅವನ ಮಾತಿನಲ್ಲೇ ಹೇಳುವುದಾದರೆ, "ಯುದ್ದದ ಸಂದರ್ಭದಲ್ಲಿ ಸಾಮಾನ್ಯ ಜನ ಭಾರೀ ಲಾಭ ಗಳಿಸಲಾಗುವುದಿಲ್ಲ. ಯುದ್ಧ ವ್ಯಾಪಾರದ ಮುಂದುವರಿಕೆಯಾಗಿರುತ್ತದೆ. ಅದರ ಮಾರ್ಗಗಳು ಬೇರೆ ಅಷ್ಟೆ. ಅದು ಮನುಷ್ಯನ ಮೌಲ್ಯಗಳನ್ನು ಹತಗೊಳಿಸುವುದಷ್ಟೇ ಅಲ್ಲ, ಅದನ್ನು ಪ್ರಾರಂಭಿಸಿದವರನ್ನೂ ಶೋಚನೀಯ ಸ್ಥಿತಿಗೆ ತಳ್ಳುತ್ತದೆ. ಯುದ್ದವನ್ನು ತಡೆಗಟ್ಟಲು ಮಾಡುವ ಪ್ರಯತ್ನ ಬೇರೆಲ್ಲಾ ತ್ಯಾಗಕ್ಕಿಂತ ಅತಿ ದೊಡ್ಡದು."
'ಮದರ್ ಕರೇಜ್' ನಾಟಕವನ್ನು ಬರೆದದ್ದು 1930 ರಲ್ಲಿ. ಆಗ ಅವನು ದೇಶಾಂತರ ವಾಸದಲ್ಲಿದ್ದ. ಅವನು ಸ್ಕ್ಯಂಡಿನೇವಿಯಾ ದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾಗಲೇ ಈ ನಾಟಕದ ವಸ್ತುವಿನ ಹೊಳಹು ಆತನಿಗೆ ಗೋಚರಿಸತೊಡಗಿತು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗುವ ಮೊದಲೇ ಅವನು ಡೆನ್ಮಾರ್ಕಿನ ಜನರಿಗೆ ಎಚ್ಛರಿಕ ಕೊಡುವ ಪ್ರಯತ್ನ ಮಾಡಿದ. ನಾಜಿ ಜರ್ಮನಿಯಂಥ ಯುದ್ಧ ನಿರತ ರಾಷ್ಟ್ರವೊಂದು ಪಕ್ಕದಲ್ಲಿರುವಾಗ ಡೆನ್ಮಾರ್ಕ್ ಲಾಭದ ದೃಷ್ಠಿಯಿಂದ ಸುಮ್ಮನೆ ಸಾರಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಅವನಿಗನ್ನೀಸಿತು.
'ಮದರ್ ಕರೇಜ್' ನಾಟಕವನ್ನು ಅರ್ಥಮಾಡಿಕೊಳ್ಲಲು ಐತಿಹಾಸಿಕ ಹಿನ್ನೆಲೆ ಅನಿವಾರ್ಯವಾಗುತ್ತದೆ. ಶೇಕ್ಸ್ ಪಿಯರ್ ನಾಟಕಗಳನ್ನು ಅರ್ಥ ಮಾಡಿಕೊಳ್ಳಲು ಎಲಿಜಬೆಥನ್ ಯುಗದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಅವಶ್ಯಕವೋ, ಮದರ್ ಕರೇಜ್ ನಾಟಕವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂವತ್ತು ವರ್ಷಗಳ ಯುದ್ಧದ ದೀರ್ಘ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಅವಶ್ಯಕ. ವಸ್ತುವಿನ ದೃಷ್ಠಿಕೋನದಿಂದ ಬ್ರೆಕ್ಟ್, ಶೇಕ್ಸ್ಪಿಯರ್ ನಿಗಿಂತ. ಭಿನ್ನವಾಗುತ್ತಾನೆ.

ಉಡುಪಿ: ಮುರಾರಿ-ಕೆದ್ಲಾಯ ರಂಗೋತ್ಸವ ಉದ್ಘಾಟನೆ --30- 3-2018

ರಥಬೀದಿ ಗೆಳೆಯರು { ರಿ } ಉಡುಪಿ- ಮುರಾರಿ ಕೆದ್ಲಾಯ ರಂಗೋತ್ಸವ -2018

Image may contain: 2 people, including Prasad Rao, people smiling

Saturday, January 27, 2018

ಉದುಪಿಯಲ್ಲಿ ರಂಗಶಂಕರ ಲೋಕಸಂಚಾರದ ನಾಟಕಗಳು -6-2-2018 to 9-2-2018

No automatic alt text available.

ಉಡುಪಿಯಲ್ಲಿ ರಂಗಶಂಕರದ ರಂಗ ತರಬೇತಿ ಶಿಬಿರಗಳು -

ಉಡುಪಿಯಲ್ಲಿ               ಲೋಕ ಸಂಚಾರದ ಕಾರ್ಯಕ್ರಮಗಳು ಹೀಗಿವೆ.

ಹೈಯರ್ ಪ್ರೈಮರಿ ಶಾಲಾ ಉಪಾಧ್ಯಾಯರುಗಳಿಗೆ ರಂಗ ತರಬೇತಿ ಶಿಬಿರ.
ಫೆಬ್ರವರಿ ೬ರಿಂದ  - ಬೆಳಿಗ್ಗೆ ೧೦ರಿಂದ ಸಂಜೆಯ .
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುಖೇಶ್ ರೋರಾ ಮತ್ತು ಅನೀಷ್ ವಿಕ್ಟರ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿರಬಾರದು.
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು.

ರಂಗಕರ್ಮಿಗಳಿಗೆ ರಂಗ ಶಿಬಿರ
ಫೆಬ್ರವರಿ ೬ರಿಂದ - ಬೆಳಿಗ್ಗೆ ೦ರಿಂದ - ಸಂಜೆಯ .
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುರೇಂದ್ರನಾಥ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿಗೆ ಇರಬಾರದು.
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು.
ಕನಿಷ್ಠ ಎರಡು ನಾಟಕದಲ್ಲಿ ಭಾಗವಹಿಸಿ ಅನುಭವವಿರಬೇಕು.
ನಾಟಕ ಮತ್ತು ರಂಗಭೂಮಿಯ ಬಗ್ಗೆ ಕನಿಷ್ಠ ಜ್ಞಾನವಿರಬೇಕು.
 ಶಿಬಿರ ಆರಂಭಿಕ ರಂಗಕರ್ಮಿಗಳಿಗೆ ಲ್ಲ.

 ಎರಡೂ ಶಿಬಿರಗಳ ಅಭ್ಯರ್ಥಿಗಳು ಸಂಜೆಯ ನಾಟಕ ನೋಡಬೇಕು.
ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ.

ನಾಟಕಗಳು -
ಫೆಬ್ರವರಿ  - ಸರ್ಕಲ್ ಆಫ್ ಲೈಫ್ - ಮಕ್ಕಳ ಪಪೆಟ್ ನಾಟಕನಿರ್ದೇಶನ ಸುರೇಂದ್ರನಾಥ್.
ಫೆಬ್ರವರಿ  - ಇನ್ನೊಂದು ಸಭಾಪರ್ವ. ನಿರ್ದೇಶನ ಶ್ರೀನಿವಾಸ ಮೂರ್ತಿ.
ಫೆಬ್ರವರಿ  - ಮರ್ಯಾದೆ ಪ್ರಶ್ನೆ - ಯುವಕರಿಗೆಂದೇ ನಾಟಕ - ನಿರ್ದೇಶನ ಸುರೇಂದ್ರನಾಥ್.
ಫೆಬ್ರವರಿ  - ಬೀದಿಯೊಳಗೊಂದು ಮನೆಯ ಮಾಡಿ - ನಿರ್ದೇಶನ ಮೋಹಿತ್ ಟಾಕಲ್ಕರ್

ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ದಯವಿಟ್ಟು ಸಂಪರ್ಕಿಸಿ  - Santhosh Shetty Hiriadka -9845632396 , muraleedhara upadhya -9448215779